ಭಾರತೀಯ ಶಿಕ್ಷಣ ವ್ಯವಸ್ಥೆಯೊಳಗಿನ ವಿದ್ಯಾರ್ಥಿಗಳಿಗೆ ಉರು ಹೊಡೆಯುವ ಮೂಲಕ ಕಲಿಯುವ ಪದ್ಧತಿಯ ಪರಿಚಯವಿದೆ, ಪುನರಾವರ್ತನೆಯ ಆಧಾರದ ಮೇಲೆ ಕಂಠಪಾಠ ಮಾಡುವ ತಂತ್ರವು ವಿದ್ಯಾರ್ಥಿಗಳಿಗೆ ತಾವು ಓದಿದ್ದನ್ನು ನೆನಪಿಸಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದರೂ, ಈ ರೀತಿಯ ಕಲಿಕೆಯು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಬದಲಾಗಿ ಕಂಠಪಾಠ ಮಾಡುವುದನ್ನು ಪ್ರೋತ್ಸಾಹಿಸುತ್ತದೆ.
ಕಾಡುವ ಸಮಸ್ಯೆ
ಭಾರತೀಯ ಶಿಕ್ಷಣ ವ್ಯವಸ್ಥೆಯೊಳಗಿನ ಪಠ್ಯಕ್ರಮವು ವ್ಯಾಖ್ಯಾನಗಳು, ಪರಿಕಲ್ಪನೆಗಳು, ಸೂತ್ರಗಳು ಮತ್ತು ತಥ್ಯಗಳನ್ನು ನೆನಪಿಟ್ಟುಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ, ಕೇವಲ 14% ಭಾರತೀಯ ತರಗತಿಗಳು ಪಠ್ಯಪುಸ್ತಕಗಳ ಹೊರತಾಗಿ ಬೋಧನಾ ಸಾಮಗ್ರಿಗಳನ್ನು ಬಳಸುತ್ತವೆ. ಇದು ಭವಿಷ್ಯದ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ, ಅಧ್ಯಯನಗಳು ಭಾರತೀಯ ಪದವೀಧರ ಎಂಜಿನಿಯರ್ ಗಳಲ್ಲಿ 25% ಕ್ಕಿಂತ ಕಡಿಮೆ ಪದವೀಧರರು ಉದ್ಯೋಗಕ್ಕೆ ಅರ್ಹರಾಗಿದ್ದಾರೆಂದು ತೋರಿಸುತ್ತದೆ.1
ವಾಸ್ತವವೆಂದರೆ, ವಿದ್ಯಾರ್ಥಿಯು ಒಂದು ಪರಿಕಲ್ಪನೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಅದನ್ನು ನೆನಪಿನಲ್ಲಿಟ್ಟುಕೊಳ್ಳದೆ ನಿಜ ಜೀವನದಲ್ಲಿ ಅನ್ವಯಿಸಲು ಸಾಧ್ಯವಾಗುತ್ತದೆ. ಇಂದಿನ ‘ಡಿಜಿಟಲ್ ಇಂಡಿಯನ್ಸ್’ ಗಾಗಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಕೀರ್ಣ ಸಮಸ್ಯೆ ಪರಿಹಾರವು ಮೂರು ಅತ್ಯಂತ ಅಪೇಕ್ಷಣೀಯ ಕೌಶಲ್ಯಗಳಾಗಿರುವುದರಿಂದ ಇದು ಅಂತಹ ಕಾರ್ಯಪಡೆಗೆ ಸಹಾಯ ಮಾಡುತ್ತದೆ.
ಪರಿಹಾರವೇನು?
ಕಂಠಪಾಠದಿಂದ ದೂರ ಸರಿಯುವುದು. ಈ ಪರಿಣಾಮಕ್ಕಾಗಿ, ನಾವು ಪ್ರತಿವರ್ಷ ಜೂನ್ 10 ರಂದು ಕಂಠಪಾಠ-ನಿಷೇಧ ದಿನವನ್ನು ಆಚರಿಸುತ್ತೇವೆ.
ಇಂದಿನ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ, ಪಿಸಿ ಶಿಕ್ಷಣದ ಮೂಲಕ ಸರಿಯಾದ ಕಲಿಕೆಯ ವಿಧಾನವನ್ನು ಕಲಿಸಲು ಸಾಧ್ಯವಿದೆ. ಇದನ್ನು ಇವುಗಳ ಮೂಲಕ ಮಾಡಬಹುದು:
ನಮ್ಮ ಆನ್ ಲೈನ್ ಕಲಿಕೆಯ ವೆಬಿನಾರ್ ಗಳ ಮೂಲಕ ನೀವು ಇಂದು ಈ ಕಲಿಕೆಯನ್ನು ಆಕರ್ಷಕವಾದ ಮತ್ತು ಸಂವಾದಾತ್ಮಕ ಕಲಿಕೆಗೆ ಬದಲಾಯಿಸಬಹುದು.
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.